*ಜ್ಯೋತಿಯ ಮುಟ್ಟಿದ ಜ್ಯೋತಿಯಂತಾಗ್ಯಾರೊ*
ಕಲ್ಯಾಣ ಬಸವಣ್ಣನ ಕಾರುಣ್ಯಕೆ ಮಾರು ಹೋಗಿ
ಕಲ್ಯಾಣ ಕಡೆಗೆ ಮುಖಮಾಡಿ/ ಶರಣ ಬಸವ
ಬಸವನ ಮಾರ್ಗ ಹಿಡದಾರೋ
ಕರ್ಮಠರ ಕಡೆಗಣಿಸಿ ಕಡಕೋಳದ ಕಾರಂಜಿಗಿ
ಇಷ್ಟಲಿಂಗಾವ ಕಟ್ಟ್ಯಾರೋ / ಶರಣ ಬಸವ
ಜಾತಿ ಅಯ್ಯಗೋಳ ಮೆಟ್ಟ್ಯಾರೋ
ಸಕಲ ಜೀವಕೆಲ್ಲ ನೀರು ಆಹಾರ ನೀಡಿ
ದಾಸೋಹ ತತ್ವ ಮೆರದಾರೊ / ಶರಣ ಬಸವ
ಕಲ್ಯಾಣದ ತಲಬಾಗಿಲಿಗಿ ನಿಂತಾರೋ
ಮಾತಿಲ್ಲದ ಮೌನದಿ ಕೃಷಿ ಕೃತ್ಯ ಕಾಯಕ ನಡೆಸಿ
ಮಣ್ಣಿನ ಕಣ ಕಣದಿ ಬಿತ್ತ್ಯಾರೋ/ ಶರಣ ಬಸವ
ಹೊನ್ನಿನ ಫಸಲ ಪಡದಾರೋ
ಜ್ಯೋತಿಯ ಮುಟ್ಟಿದ ಜ್ಯೋತಿಯಂತಾಗ್ಯಾರೊ
ಗುರು-ಶಿಷ್ಯರೊಂದಾಗಿ ನಡದಾರೋ/ಶರಣಬಸವ
ಸಮತೆಯ ಯೋಗವ ಮಾಡ್ಯಾರೋ