ರೈತರ ಹೋರಾಟಕ್ಕೆ ನಿರ್ಮಾಣವಾದ ಟೆಂಟ್ ಸಿಟಿ

ರೈತ ಪ್ರತಿಭಟನೆಯಲ್ಲಿ ಭಾಗವಹಿಸಿರುವ ರೈತರು ತಮ್ಮ ಟ್ರಾಲಿಗಳಲ್ಲಿ, ತಮ್ಮದೆ ಟೆಂಟ್‌ಗಳಲ್ಲಿ ಕಳೆದ 67 ದಿನಗಳಿಂದ ವಾಸಿಸುತ್ತಿದ್ದಾರೆ. ಆದರೆ ಪ್ರತಿಭಟನೆಗೆ ಬೆಂಬಲಿಸಿ ಬರುತ್ತಿರುವ ಜನಸಾಗರಕ್ಕೆ, ಹೊರ ರಾಜ್ಯಗಳಿಂದ ಬರುವ ರೈತರಿಗೆ ಉಳಿಯಲು ವ್ಯವಸ್ಥೆಯಾಗುತ್ತಿರುವುದು ಟೆಂಟ್ ಸಿಟಿ ಎಂಬ ಅದ್ಭುತ ಸ್ಥಳದಲ್ಲಿ.

ಹೌದು, ದೆಹಲಿಯ ಗಡಿಗಳಲ್ಲಿ ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ 67 ದಿನಗಳಿಂದ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವ ರೈತರ ಬೆಂಬಲಕ್ಕೆ ಬರುವವರಿಗೆ ಈ ಟೆಂಟ್ ಸಿಟಿಗಳು ಆಶ್ರಯತಾಣಗಳಾಗಿವೆ.

ಹೋರಾಟಕ್ಕೆ ಬೆಂಬಲ ನೀಡಲು ಬರುವ ಜನರಿಗೆ ರೈತರು ಉಳಿಯಲು ವ್ಯವಸ್ಥೆ ಮಾಡುತ್ತಿದ್ದಾರೆ. ತಮ್ಮ ಟ್ರ್ಯಾಲಿ, ಟೆಂಟ್, ಟ್ರ್ಯಾಕ್ಟರ್‌ಗಳಲ್ಲೂ ಜಾಗ ನೀಡಿದ್ದಾರೆ. ಆದರೆ ಇಷ್ಟೊಂದು ಸಂಖ್ಯೆಯಲ್ಲಿ ತುಂಬುತ್ತಿರುವ ಜನರಿಗಾಗಿ ಈ ಟೆಂಟ್ ಸಿಟಿಗಳ ಅವಶ್ಯಕತೆ ಹೆಚ್ಚಾಗಿದೆ. ಇವುಗಳ ಸೇವೆ ಈ ರೈತ ಹೋರಾಟದಲ್ಲಿ ವಿಭಿನ್ನವಾಗಿ ನಿಲ್ಲುತ್ತಿದೆ.

ಹೇಮಕುಂತ್ ಫೌಂಡೇಶನ್ ಎಂಬ ಸಾರ್ವಜನಿಕ ಸೇವಾ ಸಂಸ್ಥೆ ಪ್ರತಿಭಟನೆ ಬೆಂಬಲಿಸಿ ಬರುವವರಿಗೆ ಉಳಿಯಲು ಸಿಂಘು, ಚಿಲ್ಲಾ, ಗಾಝಿಪುರ್ ಮತ್ತು ಟಿಕ್ರಿ ಗಡಿಗಳಲ್ಲಿ ಟೆಂಟ್ ಸಿಟಿಗಳನ್ನು ನಿರ್ಮಿಸಿದೆ. ಈ ಟೆಂಟ್ ಸಿಟಿಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಪುರುಷರಿಗೂ ಇಲ್ಲಿ ಉಳಿಯಲು ಅವಕಾಶವಿದೆ. ಆದರೆ ಅವರೆಲ್ಲಾ ಹೆಚ್ಚಾಗಿ ಟ್ರ್ಯಾಲಿಗಳಲ್ಲಿ ಉಳಿಯುವ ಕಾರಣ ಇಲ್ಲಿ ಮಹಿಳೆಯರಿಗೆ ಆದ್ಯತೆ ನೀಡಲಾಗಿದೆ.

ಟೆಂಟ್ ಸಿಟಿಯಲ್ಲಿ ಉಳಿಯುವುದು ಉಚಿತವಾಗಿರುತ್ತದೆ. ಎಷ್ಟು ದಿನ ಬೇಕಿದ್ದರು ಇಲ್ಲಿ ಉಳಿಯಬಹುದು. ನಮಗೆ ಟೆಂಟ್ ನೀಡಿರುವ ದಾಖಲೆಗಾಗಿ ಯಾವುದಾದರೂ ಒಂದು ಗುರುತು ಪತ್ರ ನೀಡಬೇಕಾಗುತ್ತದೆ. ಒಬ್ಬಂಟಿಯಾಗಿರುವವರಿಗೆ ಸಿಂಗಲ್ ಟೆಂಟ್ ನೀಡಲಾಗುತ್ತಿದೆ. ಇಬ್ಬರಿದ್ದರೆ ಅವರಿಗೆ ಆಗುವಂತಹ ಟೆಂಟ್, ಇಡೀ ಕುಟುಂಬವಿದ್ದರೇ ಅವರಿಗೆ ಉಳಿಯಲು ಮತ್ತು 20 ಜನರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದರೇ ದೊಡ್ಡ ಟೆಂಟ್ ವ್ಯವಸ್ಥೆ ಮಾಡಲಾಗುತ್ತದೆ.

4 thoughts on “ರೈತರ ಹೋರಾಟಕ್ಕೆ ನಿರ್ಮಾಣವಾದ ಟೆಂಟ್ ಸಿಟಿ

  1. whoah this blog is wonderful i really like reading your articles. Keep up the great paintings! You realize, a lot of people are hunting round for this info, you could help them greatly.

Leave a Reply

Your email address will not be published. Required fields are marked *

error: Content is protected !!